ಅನ್ನಮಾಚಾರ್ಯರ ಸುಪ್ರಸಿದ್ಧ ಕೃತಿ - ಮುದ್ದುಗಾರೇ ಯಶೋದ ಮುಂಗಿಟಿ ಮುತ್ಯಮು ವೀಡು . ಕನ್ನಡದಲ್ಲಿ ಅನುವಾದ ಮಾಡಲು ಪ್ರಯತ್ನ ಮಾಡಿದ್ದೀನಿ.
-
ಮುದ್ದು ಕೃಷ್ಣ ಯಶೋದೆಯ ಅಂಗಣದ ಮುತ್ತು ಇವನು
ಸುದ್ದಿ ಯಾಗು ಮಹಿಮೆಯ ದೇವಕೀಸುತನು
ಮುದ್ದು ಕೃಷ್ಣ ಯಶೋದೆಯ ಅಂಗಣದ ಮುತ್ತು ಇವನು
ಸುದ್ದಿ ಯಾಗು ಮಹಿಮೆಯ ದೇವಕೀಸುತನು
ಅರಿಯಾದ ಗೋಪಿಯರ ಅಂಗೈಯ ಮಾಣಿಕ್ಯವು
ವಂಚಕ ಕಂಸ ಕೊಂದ ವಜ್ರ ವಿವನು
ಹೊಳೆಯುತ ಮೂರು ಲೋಕದ ಗರುಡ ಪಚ್ಚವಿವನು
ನಟ್ಟಿಗೆ ನಮ್ಮಲ್ಲಿದ್ದ ನಮ್ಮ ಕೃಷ್ಣನು
ಮುದ್ದು ಕೃಷ್ಣ ಯಶೋದೆಯ….
ರತಿಕೇಳಿ ರುಕ್ಮಿಣಿಯ ತುಟಿ ಬಣ್ಣದ ಹವಳವಿವನು
ನತ ಗೋವರ್ಧನದ ಗೋಮೇಧಿಕವು
ಸತತ ಶಂಖು ಚಕ್ರದ ಸಂದಿನ ವೈಡೂರ್ಯವು
ಗತಿಯೇ ತಾನಾಗಿಹ ಕಮಲಾಕ್ಷನು
ಮುದ್ದು ಕೃಷ್ಣ ಯಶೋದೆಯ..
ಕಾಳಿಂದಿಯ ಫಣಿಯ ಮೇಲೆ ಕಾಣುವ ಪುಷ್ಯರಾಗವು
ಇಂತಿಂಥಾ ವೇಂಕಟಾದ್ರಿ ಇಂದ್ರನೀಲವು
ಕ್ಷೀರಜಲನಿಧಿ ಯಲ್ಲಿ ಸಿಗುವಂತ ದಿವ್ಯರತ್ನವು
ಬಾಲಕ ನಂತೆ ಅಲೆಯು ಪದ್ಮನಾಭನು
ಮುದ್ದು ಕೃಷ್ಣ
ಯಶೋದೆಯ….
-ಲಕ್ಷ್ಮೀದೇವಿ.
